ಬೆಂಗಳೂರು: ರಾಜಧಾನಿಯ ವರ್ತೂರು ಪೊಲೀಸ್ ಠಾಣೆ ವ್ಯಾಪ್ತಿಯ ಬೆಳಗೆರೆಯಲ್ಲಿ ಜಲಮಂಡಳಿಯ (BWSSB) ಮಲತ್ಯಾಜ್ಯ ಶುದ್ಧೀಕರಣ ಘಟಕದಲ್ಲಿ (Drainage Filtration Plant) ಕೆಲಸ ಮಾಡುತ್ತಿದ್ದಾಗ ಭೀಕರ ಅವಘಡ ಸಂಭವಿಸಿದೆ. ಸುಮಾರು 40 ಅಡಿ ಆಳದ ಡ್ರೈನೇಜ್ ಸ್ಟೋರೇಜ್ ಟ್ಯಾಂಕ್ಗೆ ಜಾರಿ ಬಿದ್ದು ಇಬ್ಬರು ಕಾರ್ಮಿಕರು ದುರ್ಮರಣಕ್ಕೀಡಾಗಿದ್ದು, ಮತ್ತೊಬ್ಬರನ್ನು ತೀವ್ರ ನಿಗಾ ಘಟಕಕ್ಕೆ ದಾಖಲಿಸಲಾಗಿದೆ.
ವರ್ತೂರು ಸಮೀಪದ ಬೆಳಗೆರೆಯಲ್ಲಿ ಸಂಜೆ 6 ಗಂಟೆಯ ಸುಮಾರಿಗೆ ಈ ಘಟನೆ ನಡೆದಿದೆ. ಜಲಮಂಡಳಿಯ ಫಿಲ್ಟರ್ ಪ್ಲ್ಯಾಂಟ್ನಲ್ಲಿ ಮೂವರು ಯುವಕರು ಎಂದಿನಂತೆ ಕೆಲಸ ಮಾಡುತ್ತಿದ್ದಾಗ ಆಕಸ್ಮಿಕವಾಗಿ ಕಾಲು ಜಾರಿ 40 ಅಡಿ ಆಳದ ಡ್ರೈನೇಜ್ ಸಂಗ್ರಹಾಗಾರಕ್ಕೆ ಬಿದ್ದಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳದ ಸಿಬ್ಬಂಡಿ (Fire and Emergency Services) ಮತ್ತು ಪೊಲೀಸರು ಸ್ಥಳಕ್ಕೆ ಧಾವಿಸಿ ತಕ್ಷಣವೇ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ.

ಅಪಘಾತಕ್ಕೀಡಾದ ಮೂವರಲ್ಲಿ ಒಬ್ಬ ಯುವಕನನ್ನು ತಕ್ಷಣವೇ ಪತ್ತೆ ಹಚ್ಚಿ ಹೊರತೆಗೆಯಲಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ (Hospitalized). ಆದರೆ ದುರದೃಷ್ಟವಶಾತ್ ಇನ್ನಿಬ್ಬರು ಯುವಕರು ಮಲತ್ಯಾಜ್ಯದ ವಿಷಗಾಳಿಗೆ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಟ್ಯಾಂಕ್ನಿಂದ ತೀವ್ರವಾದ ಕೆಟ್ಟ ವಾಸನೆ (Foul Odor) ಬರುತ್ತಿರುವುದರಿಂದ ಮೃತದೇಹಗಳ ಪತ್ತೆ ಹಚ್ಚಲು ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ಪಡುತ್ತಿದ್ದು, ನಾಪತ್ತೆಯಾಗಿರುವ ಇಬ್ಬರ ಶವಗಳಿಗಾಗಿ ತೀವ್ರ ಹುಡುಕಾಟ ಮುಂದುವರಿದಿದೆ.
ಘಟನಾ ಸ್ಥಳಕ್ಕೆ ವರ್ತೂರು ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.




Leave a Reply