ಬೆಂಗಳೂರು: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯು (ಕೆಪಿಸಿಸಿ) ‘ಎಸ್.ಐ.ಆರ್.’ (SIR) ಪ್ರಕ್ರಿಯೆಯು ಪಕ್ಷದ ಮಾರ್ಗಸೂಚಿಗಳ ಅನುಸಾರ ಸಮರ್ಪಕವಾಗಿ ಅನುಷ್ಠಾನಗೊಳ್ಳುತ್ತಿದೆಯೇ ಎಂಬ ಬಗ್ಗೆ ನಿಗಾವಹಿಸಲು ಎಐಸಿಸಿ ಕಾರ್ಯದರ್ಶಿ ಡಾ. ಅಂಜಲಿ ನಿಂಬಾಳ್ಕರ್ ಅವರನ್ನು ವೀಕ್ಷಕರನ್ನಾಗಿ (Observer) ನೇಮಕ ಮಾಡಿದೆ.
ಈ ಕುರಿತು ಕೆಪಿಸಿಸಿ ಸಮಿತಿಯ ಅಧ್ಯಕ್ಷ ಹಾಗೂ ಎಂ.ಎಲ್.ಸಿ ಬಿ.ಕೆ. ಹರಿಪ್ರಸಾದ್ ಅವರು ಅಧಿಕೃತ ಪ್ರಕಟಣೆ ಹೊರಡಿಸಿದ್ದು, ಡಾ. ಅಂಜಲಿ ನಿಂಬಾಳ್ಕರ್ ಅವರಿಗೆ ಕಿತ್ತೂರು ಕರ್ನಾಟಕ ಭಾಗದ ಹಲವು ಜಿಲ್ಲೆಗಳ ಉಸ್ತುವಾರಿಯನ್ನು ವಹಿಸಲಾಗಿದೆ. ತಮಗೆ ವಹಿಸಿರುವ ಜಿಲ್ಲೆಗಳಲ್ಲಿ ಎಸ್.ಐ.ಆರ್. ಪ್ರಕ್ರಿಯೆಗಳು ಪಕ್ಷದ ನೀತಿ-ನಿಯಮಗಳಂತೆ ನಡೆಯುವಂತೆ ನೋಡಿಕೊಳ್ಳುವ ಮಹತ್ವದ ಜವಾಬ್ದಾರಿಯನ್ನು ಅವರು ನಿರ್ವಹಿಸಲಿದ್ದಾರೆ.

ಉಸ್ತುವಾರಿ ನೀಡಲಾದ ಜಿಲ್ಲೆಗಳು ಮತ್ತು ಪ್ರದೇಶಗಳು:
- ಕಿತ್ತೂರು ಕರ್ನಾಟಕ
- ಬೆಳಗಾವಿ ನಗರ
- ಬೆಳಗಾವಿ ಗ್ರಾಮೀಣ
- ಚಿಕ್ಕೋಡಿ
- ಬಾಗಲಕೋಟೆ
- ವಿಜಯಪುರ
- ಗದಗ
- ಹಾವೇರಿ
- ಉತ್ತರ ಕನ್ನಡ
- ಹುಬ್ಬಳ್ಳಿ ನಗರ
- ಧಾರವಾಡ ಗ್ರಾಮೀಣ


Leave a Reply