S.I.R. ಪ್ರಕ್ರಿಯೆ ಉಸ್ತುವಾರಿ: AICC ಕಾರ್ಯದರ್ಶಿ ಡಾ. ಅಂಜಲಿ ನಿಂಬಾಳ್ಕರ್‌ಗೆ ಕಿತ್ತೂರು ಕರ್ನಾಟಕ ಭಾಗದ ಜವಾಬ್ದಾರಿ

ಹಂಚಿಕೊಳ್ಳಿ

ಬೆಂಗಳೂರು: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯು (ಕೆಪಿಸಿಸಿ) ‘ಎಸ್.ಐ.ಆರ್.’ (SIR) ಪ್ರಕ್ರಿಯೆಯು ಪಕ್ಷದ ಮಾರ್ಗಸೂಚಿಗಳ ಅನುಸಾರ ಸಮರ್ಪಕವಾಗಿ ಅನುಷ್ಠಾನಗೊಳ್ಳುತ್ತಿದೆಯೇ ಎಂಬ ಬಗ್ಗೆ ನಿಗಾವಹಿಸಲು ಎಐಸಿಸಿ ಕಾರ್ಯದರ್ಶಿ ಡಾ. ಅಂಜಲಿ ನಿಂಬಾಳ್ಕರ್ ಅವರನ್ನು ವೀಕ್ಷಕರನ್ನಾಗಿ (Observer) ನೇಮಕ ಮಾಡಿದೆ.

ಈ ಕುರಿತು ಕೆಪಿಸಿಸಿ ಸಮಿತಿಯ ಅಧ್ಯಕ್ಷ ಹಾಗೂ ಎಂ.ಎಲ್.ಸಿ ಬಿ.ಕೆ. ಹರಿಪ್ರಸಾದ್ ಅವರು ಅಧಿಕೃತ ಪ್ರಕಟಣೆ ಹೊರಡಿಸಿದ್ದು, ಡಾ. ಅಂಜಲಿ ನಿಂಬಾಳ್ಕರ್ ಅವರಿಗೆ ಕಿತ್ತೂರು ಕರ್ನಾಟಕ ಭಾಗದ ಹಲವು ಜಿಲ್ಲೆಗಳ ಉಸ್ತುವಾರಿಯನ್ನು ವಹಿಸಲಾಗಿದೆ. ತಮಗೆ ವಹಿಸಿರುವ ಜಿಲ್ಲೆಗಳಲ್ಲಿ ಎಸ್.ಐ.ಆರ್. ಪ್ರಕ್ರಿಯೆಗಳು ಪಕ್ಷದ ನೀತಿ-ನಿಯಮಗಳಂತೆ ನಡೆಯುವಂತೆ ನೋಡಿಕೊಳ್ಳುವ ಮಹತ್ವದ ಜವಾಬ್ದಾರಿಯನ್ನು ಅವರು ನಿರ್ವಹಿಸಲಿದ್ದಾರೆ.

ಉಸ್ತುವಾರಿ ನೀಡಲಾದ ಜಿಲ್ಲೆಗಳು ಮತ್ತು ಪ್ರದೇಶಗಳು:

  • ಕಿತ್ತೂರು ಕರ್ನಾಟಕ
  • ಬೆಳಗಾವಿ ನಗರ
  • ಬೆಳಗಾವಿ ಗ್ರಾಮೀಣ
  • ಚಿಕ್ಕೋಡಿ
  • ಬಾಗಲಕೋಟೆ
  • ವಿಜಯಪುರ
  • ಗದಗ
  • ಹಾವೇರಿ
  • ಉತ್ತರ ಕನ್ನಡ
  • ಹುಬ್ಬಳ್ಳಿ ನಗರ
  • ಧಾರವಾಡ ಗ್ರಾಮೀಣ

Leave a Reply

Your email address will not be published. Required fields are marked *

Advertisement


This will close in 3 seconds