ಕಿರುತೆರೆಗೆ ಮರಳುತ್ತಿದೆ ಜನಪ್ರಿಯ ‘ಅಗ್ನಿಸಾಕ್ಷಿ’: ಜೂನ್ 8 ರಿಂದ ಹೊಸ ಕಥೆಯೊಂದಿಗೆ ಪ್ರಸಾರ!

ಹಂಚಿಕೊಳ್ಳಿ

ಕಿರುತೆರೆಯಲ್ಲಿ ಭಾರಿ ಜನಪ್ರಿಯತೆ ಗಳಿಸಿ, ವೀಕ್ಷಕರ ಮನಗೆದ್ದಿದ್ದ ‘ಅಗ್ನಿಸಾಕ್ಷಿ’ (Agnisakshi) ಧಾರಾವಾಹಿಯ ಟೈಟಲ್ ಇದೀಗ ಮತ್ತೆ ಕಿರುತೆರೆಗೆ ಮರಳುತ್ತಿದೆ. ಹೌದು, ಅದೇ ಹೆಸರಿನ ಹೊಸ ಧಾರಾವಾಹಿಯೊಂದು ಶುರುವಾಗುತ್ತಿದ್ದು, ಇದೇ ಜೂನ್ 8 ರಿಂದ ಪ್ರತಿದಿನ ಸಂಜೆ 7 ಗಂಟೆಗೆ ಕಿರುತೆರೆಯಲ್ಲಿ ಪ್ರಸಾರವಾಗಲಿದೆ.

ಹಳೆಯ ಕಥೆಯಲ್ಲ, ಇದು ಹೊಸ ಅಧ್ಯಾಯ!

ಈ ಹೊಸ ಧಾರಾವಾಹಿಯು ಹಿಂದಿನ ‘ಅಗ್ನಿಸಾಕ್ಷಿ’ ಧಾರಾವಾಹಿಯ ಮುಂದುವರಿದ ಭಾಗ (ಸೀಕ್ವೆಲ್) ಅಲ್ಲ ಎಂಬುದು ವಿಶೇಷ. ಬದಲಾಗಿ, ಇದು ಸಂಪೂರ್ಣವಾಗಿ ಹೊಸ ಕಥೆಯನ್ನು ಒಳಗೊಂಡಿದೆ. ಇಂದಿನ ತಲೆಮಾರಿನ ಯುವಮನಸ್ಸುಗಳ ಅಹಂಕಾರ ಮತ್ತು ಸ್ವಾಭಿಮಾನದ ನಡುವೆ ನಡೆಯುವ ಹೈ-ವೋಲ್ಟೇಜ್‌ ಕಥಾಹಂದರವನ್ನು ಈ ಧಾರಾವಾಹಿ ಹೊಂದಿದೆ. ಹೊಸ ತಲೆಮಾರಿನ ಪ್ರೇಕ್ಷಕರ ಅಭಿರುಚಿಗೆ ತಕ್ಕಂತೆ ರೋಚಕವಾಗಿ ಕಥೆಯನ್ನು ಹೆಣೆಯಲಾಗಿದೆ.

ತಾರಾಗಣ ಮತ್ತು ತಾಂತ್ರಿಕ ವರ್ಗ

ಹೊಸ ‘ಅಗ್ನಿಸಾಕ್ಷಿ’ ಧಾರಾವಾಹಿಯು ಭರವಸೆಯ ಯುವ ಪ್ರತಿಭೆಗಳನ್ನು ಮತ್ತು ನುರಿತ ತಾಂತ್ರಿಕ ವರ್ಗವನ್ನು ಒಳಗೊಂಡಿದೆ. ಮುಖ್ಯ ಭೂಮಿಕೆಯಲ್ಲಿ ಬಿಗ್‌ಬಾಸ್ ಖ್ಯಾತಿಯ ಶಮಂತ್ ಗೌಡ ಅಲಿಯಾಸ್ ಬ್ರೋ ಗೌಡ ಅವರು ‘ಅಗ್ನಿ’ ಪಾತ್ರದಲ್ಲಿ ನಟಿಸುತ್ತಿದ್ದರೆ, ನಟಿ ವರ್ಷಿಣಿ ಅವರು ‘ಸಾಕ್ಷಿ’ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.

ಇತರೆ ತಾರಾಗಣದಲ್ಲಿ ಅಕ್ಷತ, ಲೇಖನ, ಶ್ರೀಕಾಂತ್ ಮುಂತಾದ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಧಾರಾವಾಹಿಗೆ ಪ್ರಶಾಂತ್ ಡಿ.ಪಿ ಅವರು ಆಕ್ಷನ್ ಕಟ್ ಹೇಳುತ್ತಿದ್ದಾರೆ. ವಿಶೇಷವೆಂದರೆ, ಈ ಹಿಂದಿನ ‘ಅಗ್ನಿಸಾಕ್ಷಿ’ ಧಾರಾವಾಹಿಗೆ ಕಥೆ-ಚಿತ್ರಕಥೆ ಬರೆದು ಯಶಸ್ಸು ತಂದುಕೊಟ್ಟಿದ್ದ ಬರಹಗಾರ ಹ್ಯಾರಿಸ್ ಅವರೇ ಈ ಹೊಸ ಕಥೆಗೂ ಲೇಖನಿಯಾಗಿದ್ದಾರೆ.

Leave a Reply

Your email address will not be published. Required fields are marked *

Advertisement


This will close in 3 seconds